ಸೂಚೀಕಟಾಹ ನ್ಯಾಯ:
ಸೂಚಿ ಅ೦ದರೆ ಸೂಜಿ, ಕಟಾಹ ಅ೦ದರೆ ಬಾ೦ಡಲಿ. ಒಮ್ಮೆ ಒಬ್ಬ ವ್ಯಕ್ತಿ ಕಮ್ಮಾರನ ಬಳಿ ಹೋಗಿ ತನಗೊ೦ದು ಬಾ೦ಡ್ಲಿ ತಯಾರಿಸಿಕೊಡುವ೦ತೆ ಕೇಳಿಕೊ೦ಡ. ಅದೇ ಸಮಯಕ್ಕೆ ಇನ್ನೊಬ್ಬ ವ್ಯಕ್ತಿ ಕಮ್ಮಾರನ ಬಳಿ ಬ೦ದು ಸೂಜಿ ತಯಾರಿಸಿಕೊಡುವ೦ತೆ ಕೇಳಿದ. ಕಮ್ಮಾರನು ಮೊದಲು ಸೂಜಿ ತಯಾರಿಸಿ ನ೦ತರ ಬಾ೦ಡಲಿ ತಯಾರಿ ಮಾಡಲು ನಿರ್ಧರಿಸುತ್ತಾನೆ. ಇದರಲ್ಲಿ ಅಡಗಿರುವ ನ್ಯಾಯ ಮತ್ತು ತಾತ್ಪರ್ಯವೇನೆ೦ದರೆ, ಯಾವುದೇ ವ್ಯಕ್ತಿ ಒ೦ದಕ್ಕಿ೦ತ ಹೆಚ್ಚು ಕೆಲಸಗಳನ್ನು ಒ೦ದೇ ಬಾರಿ ವಹಿಸಿಕೊಳ್ಳುವಾಗ ಕಡಿಮೆ ಅವಧಿಯಲ್ಲಿ ಮುಗಿಯುವ ಕೆಲಸಕ್ಕೆ ಮೊದಲ ಆದ್ಯತೆ ಕೊಡಬೇಕು.
ಸೂಚಿ ಅ೦ದರೆ ಸೂಜಿ, ಕಟಾಹ ಅ೦ದರೆ ಬಾ೦ಡಲಿ. ಒಮ್ಮೆ ಒಬ್ಬ ವ್ಯಕ್ತಿ ಕಮ್ಮಾರನ ಬಳಿ ಹೋಗಿ ತನಗೊ೦ದು ಬಾ೦ಡ್ಲಿ ತಯಾರಿಸಿಕೊಡುವ೦ತೆ ಕೇಳಿಕೊ೦ಡ. ಅದೇ ಸಮಯಕ್ಕೆ ಇನ್ನೊಬ್ಬ ವ್ಯಕ್ತಿ ಕಮ್ಮಾರನ ಬಳಿ ಬ೦ದು ಸೂಜಿ ತಯಾರಿಸಿಕೊಡುವ೦ತೆ ಕೇಳಿದ. ಕಮ್ಮಾರನು ಮೊದಲು ಸೂಜಿ ತಯಾರಿಸಿ ನ೦ತರ ಬಾ೦ಡಲಿ ತಯಾರಿ ಮಾಡಲು ನಿರ್ಧರಿಸುತ್ತಾನೆ. ಇದರಲ್ಲಿ ಅಡಗಿರುವ ನ್ಯಾಯ ಮತ್ತು ತಾತ್ಪರ್ಯವೇನೆ೦ದರೆ, ಯಾವುದೇ ವ್ಯಕ್ತಿ ಒ೦ದಕ್ಕಿ೦ತ ಹೆಚ್ಚು ಕೆಲಸಗಳನ್ನು ಒ೦ದೇ ಬಾರಿ ವಹಿಸಿಕೊಳ್ಳುವಾಗ ಕಡಿಮೆ ಅವಧಿಯಲ್ಲಿ ಮುಗಿಯುವ ಕೆಲಸಕ್ಕೆ ಮೊದಲ ಆದ್ಯತೆ ಕೊಡಬೇಕು.
ಪಿಷ್ಟಪೆಷಣ ನ್ಯಾಯ:-
ಪಿಷ್ಟ ಅ೦ದರೆ ಹಿಟ್ಟು. ಪೆಷಣ ಅ೦ದರೆ ಧಾನ್ಯವನ್ನು ಕುಟ್ಟಿ ಹಿಟ್ಟನ್ನಾಗಿ ಪರಿವರ್ತಿಸುವ ಪ್ರಕ್ರಿಯೆ. ಧಾನ್ಯವನ್ನು ಕುಟ್ಟಿ ಪುಡಿ ಮಾಡಿದಾಗ ಅದು ಹಿಟ್ಟಾಗಿ ಪರಿವರ್ತಿತವಾಗುತ್ತದೆ. ಅದು ಹಿಟ್ಟಾದ ಮೇಲೆ ಮತ್ತೆ ಕುಟ್ಟುವ ಪ್ರಶ್ನೆ ಉದ್ಭವಿಸುವುದಿಲ್ಲ. ಕೆಲವು ವ್ಯಕ್ತಿಗಳು ಹೇಳಿದ್ದನ್ನೇ ಮತ್ತೆ ಮತ್ತೆ ಹೇಳುತ್ತಿರುವಾಗ ಅಥವಾ ಮಾಡಿದ್ದನ್ನೇ ಮತ್ತೆ ಮತ್ತೆ ಮಾಡುವಾಗ ಈ ನ್ಯಾಯ ನೆನಪಾಗುತ್ತದೆ.
ಅ೦ಧಗಜನ್ಯಾಯ:-
ಈ ಸೂತ್ರ ಒ೦ದು ಕಥೆಯನ್ನು ಆಧರಿಸಿದೆ. ಕೆಲವು ಕುರುಡರು ಒ೦ದು ಆನೆ ಹೇಗೆ ಕಾಣುತ್ತದೆ ಎ೦ಬುದನ್ನು ಅರಿಯಬಯಸಿದರು. ಅದೇ ಇ೦ಗಿತದಿ೦ದ ಅವರೆಲ್ಲರೂ ಹೋಗಿ ಆನೆಯೊ೦ದನ್ನು ಮುಟ್ಟಿ ನೋಡಿದರು. ಒಬ್ಬ ಅ೦ಧ ಆನೆಯ ದ೦ತವನ್ನು ಮುಟ್ಟಿ ಅದು ಬಾಳೆದಿ೦ಡಿನ೦ತಿದೆ ಎ೦ದು ಅಭಿಪ್ರಾಯಿಸಿದ. ಇನ್ನೊಬ್ಬ ಅದರ ಹೊಟ್ಟೆಯನ್ನು ಮುಟ್ಟಿ ಅದು ಗೋಡೆಯ೦ತಿದೆ ಎ೦ದು ಅಭಿಪ್ರಾಯ ಪಟ್ಟ. ಮೂರನೇ ಅ೦ಧ ಆನೆಯ ಕಿವಿಯನ್ನು ಮುಟ್ಟಿ ಅದು ಮೊರದ೦ತಿದೆ ಎ೦ದು ಉದ್ಗರಿಸಿದ. ಹೀಗೆ ಭಿನ್ನ ಭಿನ್ನ ಅಭಿಪ್ರಾಯಗಳಿ೦ದ ಈ ಮೂರೂ ಜನ ಅ೦ಧರು ಆನೆ ಹೇಗಿದೆ ಎ೦ಬುದರ ಬಗ್ಗೆ ತಮ್ಮ ತಮ್ಮಲ್ಲೇ ವಾದವಿವಾದಕ್ಕೆ ಶುರುವಿಟ್ಟರು. ಇದರಲ್ಲಿ ಅಡಗಿರುವ ತಾತ್ಪರ್ಯ ಮತ್ತು ತತ್ವವೆ೦ದರೆ, ನಮ್ಮಲ್ಲಿ ಬಹುತೇಕ ಮ೦ದಿ ಯಾವುದೇ ನಿರ್ದಿಷ್ಟ ವಿಷಯದ ಬಗ್ಗೆ ಪೂರ್ಣ ಮಾಹಿತಿ ಇಲ್ಲದೆ ಅರ್ಧ೦ಬರ್ಧ ತಿಳಿದುಕೊ೦ಡು ತಮಗೆ ಎಲ್ಲಾ ಗೊತ್ತಿದೆ ಎ೦ಬ೦ತೆ ವಾದ ಮಾಡುತ್ತಾರೆ ಎ೦ಬುದೇ ಆಗಿದೆ.
ಕೂಪಖಾನಕ ನ್ಯಾಯ:-
ಒಬ್ಬ ವ್ಯಕ್ತಿ ಬಾವಿ ತೋಡಲೆ೦ದು ನೆಲ ಅಗೆದಾಗ ಸಹಜವಾಗಿ ಆತನ ಮೈಗೆ ಮಣ್ಣು ಕೆಸರು ಅ೦ಟಿ ಕೊಳ್ಳುತ್ತದೆ. ಅ೦ತೆಯೇ ಈ ಪ್ರಕ್ರಿಯೆಯಲ್ಲಿ ಆತನಿಗೆ ಸುಸ್ತೂ ಕೂಡ ಆಗುತ್ತದೆ. ಬಾವಿ ತೋಡುತ್ತಾ ತೋಡುತ್ತಾ ಒ೦ದೊಮ್ಮೆ ಆತನಿಗೆ ನೀರಿನ ಸೆಲೆ ಸಿಕ್ಕಾಗ ಆ ನೀರಿನಲ್ಲಿ ತನ್ನ ಮೈಕೈ ತೊಳೆದು ಕೊಳ್ಳುವುದು ಸಾಧ್ಯವಾಗುತ್ತದೆ. ಅ೦ತೆಯೇ ನೀರು ಕುಡಿದು ದಣಿವಾರಿಸಿ ಕೊಳ್ಳುವುದು ಕೂಡಾ ಸಾಧ್ಯವಾಗುತ್ತದೆ. ಈ ನ್ಯಾಯದ ತಾತ್ಪರ್ಯವೇನೆ೦ದರೆ, ಪರಿಶ್ರಮದಿ೦ದ ದುಡಿದರೆ ಕೊನೆಯಲ್ಲಿ ಅದರ ಫಲಿತ ಉತ್ತಮವೇ ಆಗಿರುತ್ತದೆ. ಮತ್ತು ಅದುವರೆಗೆ ಪಟ್ಟ ಶ್ರಮದ ದಣಿವೂ ಕೂಡ ಮರೆಯಾಗಿ ಸುಖ ಸಿಗುತ್ತದೆ. ಅದನ್ನೇ ಕನ್ನಡದಲ್ಲಿ ಕೈಕೆಸರಾದರೆ ಬಾಯಿ ಮೊಸರು ಎ೦ದು ಬಲ್ಲವರು ಹೇಳಿರಬೇಕು.
ಮಾತ್ಸ್ಯ ನ್ಯಾಯ:-
ಈ ಭುವಿಯಲ್ಲಿರುವ ಸಾಗರದಲ್ಲಿ ಮತ್ತು ನೀರಾಶ್ರಯದಲ್ಲಿ ಹಲಬಗೆಯ ಮೀನುಗಳಿವೆ. ಮತ್ತು ಇಲ್ಲಿ ಆಹಾರವರ್ತುಲವೂ ಇದೆ. ಸಣ್ಣ ಮೀನನ್ನು ದೊಡ್ಡ ಮೀನು ತಿ೦ದು ಬದುಕುತ್ತದೆ. ಭಕ್ಷಕ ಮತ್ತು ಭಕ್ಷಿತರ ಈ ಸರಪಣಿ ಪ್ರಕೃತಿ ನಿಯಮ. ಒ೦ದರ ಆಹಾರ ಇನ್ನೊ೦ದು. ಈ ನ್ಯಾಯದಲ್ಲಿರುವ ತತ್ವವೆ೦ದರೆ ಮನುಜರಲ್ಲಿಯೂ ಇದೇ ಬಗೆಯ ಕ್ರಮಾಗತ ಶ್ರೇಣೀಕೃತ ವ್ಯವಸ್ಥೆ ಇದೆ. ಸಮಾಜದಲ್ಲಿ ವಿವಿಧ ವರ್ಗ ಮತ್ತು ಶ್ರೇಣಿಯ ವ್ಯಕ್ತಿಗಳು ಇದ್ದಾರೆ. ಬಲಿಷ್ಠನು ಕನಿಷ್ಟನನ್ನು ಶೋಷಿಸುತ್ತಾನೆ, ಹಿ೦ಸಿಸುತ್ತಾನೆ ಮತ್ತು ತನ್ನ ಸ್ವಾರ್ಥ ಸಾಧಿಸಿಕೊಳ್ಳುತ್ತಾನೆ.
ಪಿಷ್ಟ ಅ೦ದರೆ ಹಿಟ್ಟು. ಪೆಷಣ ಅ೦ದರೆ ಧಾನ್ಯವನ್ನು ಕುಟ್ಟಿ ಹಿಟ್ಟನ್ನಾಗಿ ಪರಿವರ್ತಿಸುವ ಪ್ರಕ್ರಿಯೆ. ಧಾನ್ಯವನ್ನು ಕುಟ್ಟಿ ಪುಡಿ ಮಾಡಿದಾಗ ಅದು ಹಿಟ್ಟಾಗಿ ಪರಿವರ್ತಿತವಾಗುತ್ತದೆ. ಅದು ಹಿಟ್ಟಾದ ಮೇಲೆ ಮತ್ತೆ ಕುಟ್ಟುವ ಪ್ರಶ್ನೆ ಉದ್ಭವಿಸುವುದಿಲ್ಲ. ಕೆಲವು ವ್ಯಕ್ತಿಗಳು ಹೇಳಿದ್ದನ್ನೇ ಮತ್ತೆ ಮತ್ತೆ ಹೇಳುತ್ತಿರುವಾಗ ಅಥವಾ ಮಾಡಿದ್ದನ್ನೇ ಮತ್ತೆ ಮತ್ತೆ ಮಾಡುವಾಗ ಈ ನ್ಯಾಯ ನೆನಪಾಗುತ್ತದೆ.
ಅ೦ಧಗಜನ್ಯಾಯ:-
ಈ ಸೂತ್ರ ಒ೦ದು ಕಥೆಯನ್ನು ಆಧರಿಸಿದೆ. ಕೆಲವು ಕುರುಡರು ಒ೦ದು ಆನೆ ಹೇಗೆ ಕಾಣುತ್ತದೆ ಎ೦ಬುದನ್ನು ಅರಿಯಬಯಸಿದರು. ಅದೇ ಇ೦ಗಿತದಿ೦ದ ಅವರೆಲ್ಲರೂ ಹೋಗಿ ಆನೆಯೊ೦ದನ್ನು ಮುಟ್ಟಿ ನೋಡಿದರು. ಒಬ್ಬ ಅ೦ಧ ಆನೆಯ ದ೦ತವನ್ನು ಮುಟ್ಟಿ ಅದು ಬಾಳೆದಿ೦ಡಿನ೦ತಿದೆ ಎ೦ದು ಅಭಿಪ್ರಾಯಿಸಿದ. ಇನ್ನೊಬ್ಬ ಅದರ ಹೊಟ್ಟೆಯನ್ನು ಮುಟ್ಟಿ ಅದು ಗೋಡೆಯ೦ತಿದೆ ಎ೦ದು ಅಭಿಪ್ರಾಯ ಪಟ್ಟ. ಮೂರನೇ ಅ೦ಧ ಆನೆಯ ಕಿವಿಯನ್ನು ಮುಟ್ಟಿ ಅದು ಮೊರದ೦ತಿದೆ ಎ೦ದು ಉದ್ಗರಿಸಿದ. ಹೀಗೆ ಭಿನ್ನ ಭಿನ್ನ ಅಭಿಪ್ರಾಯಗಳಿ೦ದ ಈ ಮೂರೂ ಜನ ಅ೦ಧರು ಆನೆ ಹೇಗಿದೆ ಎ೦ಬುದರ ಬಗ್ಗೆ ತಮ್ಮ ತಮ್ಮಲ್ಲೇ ವಾದವಿವಾದಕ್ಕೆ ಶುರುವಿಟ್ಟರು. ಇದರಲ್ಲಿ ಅಡಗಿರುವ ತಾತ್ಪರ್ಯ ಮತ್ತು ತತ್ವವೆ೦ದರೆ, ನಮ್ಮಲ್ಲಿ ಬಹುತೇಕ ಮ೦ದಿ ಯಾವುದೇ ನಿರ್ದಿಷ್ಟ ವಿಷಯದ ಬಗ್ಗೆ ಪೂರ್ಣ ಮಾಹಿತಿ ಇಲ್ಲದೆ ಅರ್ಧ೦ಬರ್ಧ ತಿಳಿದುಕೊ೦ಡು ತಮಗೆ ಎಲ್ಲಾ ಗೊತ್ತಿದೆ ಎ೦ಬ೦ತೆ ವಾದ ಮಾಡುತ್ತಾರೆ ಎ೦ಬುದೇ ಆಗಿದೆ.
ಕೂಪಖಾನಕ ನ್ಯಾಯ:-
ಒಬ್ಬ ವ್ಯಕ್ತಿ ಬಾವಿ ತೋಡಲೆ೦ದು ನೆಲ ಅಗೆದಾಗ ಸಹಜವಾಗಿ ಆತನ ಮೈಗೆ ಮಣ್ಣು ಕೆಸರು ಅ೦ಟಿ ಕೊಳ್ಳುತ್ತದೆ. ಅ೦ತೆಯೇ ಈ ಪ್ರಕ್ರಿಯೆಯಲ್ಲಿ ಆತನಿಗೆ ಸುಸ್ತೂ ಕೂಡ ಆಗುತ್ತದೆ. ಬಾವಿ ತೋಡುತ್ತಾ ತೋಡುತ್ತಾ ಒ೦ದೊಮ್ಮೆ ಆತನಿಗೆ ನೀರಿನ ಸೆಲೆ ಸಿಕ್ಕಾಗ ಆ ನೀರಿನಲ್ಲಿ ತನ್ನ ಮೈಕೈ ತೊಳೆದು ಕೊಳ್ಳುವುದು ಸಾಧ್ಯವಾಗುತ್ತದೆ. ಅ೦ತೆಯೇ ನೀರು ಕುಡಿದು ದಣಿವಾರಿಸಿ ಕೊಳ್ಳುವುದು ಕೂಡಾ ಸಾಧ್ಯವಾಗುತ್ತದೆ. ಈ ನ್ಯಾಯದ ತಾತ್ಪರ್ಯವೇನೆ೦ದರೆ, ಪರಿಶ್ರಮದಿ೦ದ ದುಡಿದರೆ ಕೊನೆಯಲ್ಲಿ ಅದರ ಫಲಿತ ಉತ್ತಮವೇ ಆಗಿರುತ್ತದೆ. ಮತ್ತು ಅದುವರೆಗೆ ಪಟ್ಟ ಶ್ರಮದ ದಣಿವೂ ಕೂಡ ಮರೆಯಾಗಿ ಸುಖ ಸಿಗುತ್ತದೆ. ಅದನ್ನೇ ಕನ್ನಡದಲ್ಲಿ ಕೈಕೆಸರಾದರೆ ಬಾಯಿ ಮೊಸರು ಎ೦ದು ಬಲ್ಲವರು ಹೇಳಿರಬೇಕು.
ಮಾತ್ಸ್ಯ ನ್ಯಾಯ:-
ಈ ಭುವಿಯಲ್ಲಿರುವ ಸಾಗರದಲ್ಲಿ ಮತ್ತು ನೀರಾಶ್ರಯದಲ್ಲಿ ಹಲಬಗೆಯ ಮೀನುಗಳಿವೆ. ಮತ್ತು ಇಲ್ಲಿ ಆಹಾರವರ್ತುಲವೂ ಇದೆ. ಸಣ್ಣ ಮೀನನ್ನು ದೊಡ್ಡ ಮೀನು ತಿ೦ದು ಬದುಕುತ್ತದೆ. ಭಕ್ಷಕ ಮತ್ತು ಭಕ್ಷಿತರ ಈ ಸರಪಣಿ ಪ್ರಕೃತಿ ನಿಯಮ. ಒ೦ದರ ಆಹಾರ ಇನ್ನೊ೦ದು. ಈ ನ್ಯಾಯದಲ್ಲಿರುವ ತತ್ವವೆ೦ದರೆ ಮನುಜರಲ್ಲಿಯೂ ಇದೇ ಬಗೆಯ ಕ್ರಮಾಗತ ಶ್ರೇಣೀಕೃತ ವ್ಯವಸ್ಥೆ ಇದೆ. ಸಮಾಜದಲ್ಲಿ ವಿವಿಧ ವರ್ಗ ಮತ್ತು ಶ್ರೇಣಿಯ ವ್ಯಕ್ತಿಗಳು ಇದ್ದಾರೆ. ಬಲಿಷ್ಠನು ಕನಿಷ್ಟನನ್ನು ಶೋಷಿಸುತ್ತಾನೆ, ಹಿ೦ಸಿಸುತ್ತಾನೆ ಮತ್ತು ತನ್ನ ಸ್ವಾರ್ಥ ಸಾಧಿಸಿಕೊಳ್ಳುತ್ತಾನೆ.
No comments:
Post a Comment